Tuesday, November 17, 2009

ಮಗ್ಗುಲು ಬದಲಿಸಿದಾಗ !!!


ಅಬ್ಬಬ್ಬಾ... ಹೀಗೂ ಉಂಟೆ? ಅಂತ ಅನ್ನಿಸದೆ ಇರದು. ಎಲ್ಲಿಂದ ಎಲ್ಲಿಗೆ ಬಂದೆ ಅಂತ ಒಮ್ಮೆ ತಿರುಗಿ ನೋಡಿದ್ರೆ ಆಶ್ಚರ್ಯ ಆಗುತ್ತೆ! ಮನಸಿನಲ್ಲಿ ಮೂಡುತಿದ್ದ ನೂರಾರು ಬಗೆಯ ಆಲೋಚನೆನೆಗಳಿಗೆ ಕೊನೆಗೂ ಒಂದು ಆಯಾಮ ಸಿಕ್ಕಿದೆ ಅಂತ ಕಾಣುತ್ತೆ.. ಅದೇ ನರಕ(?) ದಲ್ಲಿ ಈ ಒಂದು ವರ್ಷ ಕಳೆಯಬೇಕೋ ಅಂತ ಭಯ ಪಟ್ಟಿದ್ದೆ.. ಕೊನೆಗೂ ಎಲ್ಲವನ್ನು ಕಡೆಗಣಿಸಿ, ಕರುಣೆ, ಕಮಿಟ್ಮೆಂಟ್ , ಅನ್ನೋ ಪದಗಳ ಅರ್ಥಗಳನ್ನೂ ಮರೆತು ಇಲ್ಲಿಗೆ ಬಂದಾಯಿತು.. ನನ್ನ ಬಗ್ಗೆ ಇನ್ನೊಬ್ರು ಏನು ಹೇಳ್ತಾರೆ ಮುಖ್ಯ ಅಲ್ಲ.. ನನ್ನ ಬದುಕಿಗೆ ಯಾವುದು ಮುಖ್ಯ ಅನ್ನೋ ಸತ್ಯ ಇನ್ನಾದ್ರು ನಂಗೆ ಗೊತ್ತಗಿದ್ಯಾ? ಶಿಕ್ಷಕ ವೃತ್ತಿ ಯನ್ನು ಒಂದೊಮ್ಮೆ ಇಷ್ಟ ಪಟ್ಟವ ನಾನು. ಆ ವೃತ್ತಿಯಲ್ಲಿ ಏನೇನೋ ಕಲ್ಪನೆಗಳನ್ನು ಇಟ್ಟುಕೊಂಡಿದ್ದವನಾನು. ಆದರೆ ಆ ಎಲ್ಲ ಮುನ್ನೆಚ್ಚರಿಕೆಗಳು ಮೊದಲನೆಯ ದಿನವೇ ಸೋಲಪ್ಪಿದವು. ದಿನೇ ದಿನೇ ಮನಸ್ಸು ನೊಂದು ಹೋಯಿತೇ ವಿನಃ ಸುದಾರಿಕೆಯ ಸೂಚನೆ ಕಂಡು ಬರಲೇ ಇಲ್ಲ.. ಸಮಸ್ಯೆ ಯನ್ನು ಗೆದ್ದು ಬರೋದು ಅಸ್ತು ಸುಲ್ಬವಾಗಿರಲಿಲ್ಲ.. ಮನಸ್ಸು ಜವಾಬ್ದಾರಿ ಹೊರಲು ತಯಾರಿರಲಿಲ್ಲ.. ಬದಲಾವಣೆ ತರಲು ಒಪ್ಪಲಿಲ್ಲ.. ಮನಸ್ಸು ಸಂತೋಷವಗಿಲ್ಲಂದ್ರೆ ಏನು ಮಾಡೋಕೆ ಸದ್ಯ?? ಅಲ್ಲಿದ್ದು ಏನು ಪ್ರಯೋಜನ? ಬದಲಾವಣೆ ಬೇಕಿತ್ತು.. ಎದ್ದುಕೊಂಡು ಬಂದು ಬಿಟ್ಟೆ..!!