Wednesday, July 22, 2009

mಅಡಿಕೆರಿಯಲ್ಲಿ ನನ್ನ ಬದುಕು ಹೀಗೆ ಚಿಗುರೊಡೆಯುತ್ತಾ ಇದೆ ..........
ಜೀವನದ ೨ನೆಯ ಅಧ್ಯಾಯ ಹೀಗೆ ಆರಂಭ ಆಗ್ತಾ ಇದೆ. ಅಂದುಕೊಂಡ ಹಾಗೆ ಯಾವುದೂ ಆಗಲ್ಲ ಅಂದಿದ್ದೆ . ತಪ್ಪು ನಮ್ಮದೇ ಕಣ್ರೀ . ನಮ್ಮಲ್ಲಿ ಒಂದು ಧೃಡ ನಿರ್ಧಾರ ಅನ್ನುವನ್ಥದೊಂದು ಇಲ್ಲವೇ ಇಲ್ಲ. ನಾವು ಏನು ಆಗಬೇಕು ಅಂತ ನಮಗೆ ಗೊತ್ತಿರಲ್ಲ . ಏನು ಆಗಬೇಕು ಅಂತ ನಂಬೆ ಗೊತ್ತಿರಲ್ಲ. ಗೊತ್ತಿದ್ರು ಆ ರೀತಿ ಆಗಲು ಪ್ರಯತ್ಣನೆ ಪಡಲ್ಲ. ಕೊನೆಗೆ ಏನೇನೂ ಅಗ್ಬಿತ್ತು ಅದರಲ್ಲೇ ಸಂತೋಷ ಪಡ್ತೇವೆ.
ನಾನೂ ಈಗ ಹೇಳಿಕೇಳಿ ಲೆಕ್ಚರರ್. ನಂಗೆ ಹಾಗೆ ಆಗಿರುವಂತೆ ಅನ್ನಿಸ್ತಾನೆ ಇಲ್ಲ. ಪಾಪ ಮಕ್ಕಳು ಅದ್ಯಾಕೋ ಸಲ್ಯೂಟ್ ಮಾಡ್ತಾನೆ ಇರ್ತಾರೆ.. !! ನಾನು ಅದನ್ನು ಸ್ವೀಕರಿಸ್ತನೆ ಒಂದು ತರದ ಖುಷಿ ಅನುಭವಿಸ್ತೇನೆ..
ಅಂತು ಜೀವನದ ೨ನೆ ಅಧ್ಯಾಯ ಆರಂಭ ಆಗಿದೆ... ವಾತಾವರಣಕ್ಕೆ ಹೊಂದಿ ಕೊಂದ್ದಿದ್ದೇನೆ . ತರಗತಿಗಳು ಗತಿ ಪಡೆದು ಕೊಳ್ತಾ ಇವೆ..